ಗುರುವಾರ, ಏಪ್ರಿಲ್ 23, 2009

ಲಸಿಕೆ ಎಂಬ ಮಹಾವಿಶ -೨

೧೯೧೧ ರಿಂದ ೧೯೩೫ರ ಅವಧಿಯಲ್ಲಿ ಅಮೇರಿಕಾದಲ್ಲಿ ಸಂಕ್ರಾಮಿಕ ರೋಗಗಳ ಕಾರಣ ಅತಿ ಹೆಚ್ಚು ಮಕ್ಕಳು ಸತ್ತದ್ದು ಡಿಪ್ತೀರಿಯಾ, ನಾಯಿಕೆಮ್ಮು, ಸ್ಕಾರ್ಲೆಟ್ ಜ್ವರ ಮತ್ತು ದಢಾರದಿಂದಾಗಿ. ಆದರೆ ೧೯೪೫ರ ವೇಳೆಗೆ ಸಾವಿನ ಸಂಖ್ಯೆ ಶೇ.೯೫ರಷ್ಟು ಕಡಿಮೆಯಾಗಿ ಹೋಗಿತ್ತು! (ಆಕರ: ಡುಬ್ಲಿನ್.ಎಲ್. ಮೆಟ್ರೋಪಾಲಿಟನ್ ಲೈಫ಼್ ಇನ್ಶುರೆನ್ಸ್ ಕಂಪನಿ, ೧೯೪೮, "೧೯೩೫-೪೫ ರಲ್ಲಿ ಆರೋಗ್ಯದ ವೃದ್ಧಿಯ ವರದಿ".) ರೋಗಿಗಳ ಸಂಖ್ಯೆಗಳ ಇಳಿಮುಖವಾಗಲು ಒಳಚರಂಡಿ ಮತ್ತು ಸ್ವಚ್ಛತೆಯಲ್ಲಿ ಸುಧಾರಣೆಗಳನ್ನು ಕಂಡಿದ್ದು ಪ್ರಮುಖ ಕಾರಣಗಳೆಂದು ಹೇಳಲಾಗುತ್ತದೆ. ("ಮರ್ಬಿಡಿಟಿ ಅಂಡ್ ಮಾರ್ಟಾಲಿಟಿ ವೀಕ್ಲಿ’ ಸಾಪ್ತಾಹಿಕ ವರದಿ. ಜು.೧೯೯೯). ಲಸಿಕೆ ಹಾಕಲು ಶುರು ಮಾಡುವ ಮುಂಚೆಯೇ ರೋಗದ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿರುವುದು ಅಂಕಿ ಅಂಶಗಳನ್ನು ಗಮನಿಸಿದರೆ ಗೊತ್ತಾಗುತ್ತದೆ.
ಡಾ.ಸೈಡನ್‍ಹ್ಯಾಮ್ ರವರ ಪ್ರಕಾರ ವೈದ್ಯರು ಹಾಗೂ ದಾದಿಯರ ಕುತಂತ್ರವಿಲ್ಲದಿದ್ದರೆ ಸಿಡುಬು ಅಪಾಯರಹಿತ ಹಾಗೂ ಲಘು ರೋಗವಾಗಿದೆ. ಸಿಡುಬು ದೇಹದಲ್ಲಿನ ವಿಷವನ್ನು ಬೆವರು, ಗುಳ್ಳೆಗಳ ಕೀವು, ಮೂತ್ರದ ಮೂಲಕ ವಿಷವನ್ನು ಹೊರಹಾಕುತ್ತದೆ. ಆದ್ದರಿಂದಲೇ ಸಿಡುಬು ಬಂದವರಿಗೆ ಹೆಚ್ಚಾಗಿ ನೀರಡಿಕೆಯಾಗುವುದು! ಸಿಡುಬಿನಿಂದ ದೂರವಿರುವ ಮಾರ್ಗವೆಂದರೆ ಉತ್ತಮ ಆಹಾರ, ವಿಹಾರ, ಶುಚಿತ್ವ!
ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮಗಳ ಔಚಿತ್ಯದ ಹಿಂದೆ ಒಂದು ತರ್ಕಬದ್ಧವಾದ ಪ್ರಶ್ನೆಯಿದೆ. ವಿಶ್ವದ ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಹವಾಮಾನ, ಆಹಾರ ಪದ್ಧತಿ, ವಾತಾವರಣ ಇರುತ್ತವೆ. ಇವೆಲ್ಲವನ್ನೂ ನಿರ್ಲಕ್ಷಿಸಿ ಎಲ್ಲರಿಗೂ ಒಂದೇ ರೀತಿಯ ಲಸಿಕೆ ಹಾಕುವುದು ಸರಿಯೇ ? ಸಾಮೂಹಿಕ ಲಸಿಕೆ ಹಾಕುವ ಮುಂಚೆ ಆಯಾ ಪ್ರದೇಶದಲ್ಲಿ ಆಯಾ ವಾತಾವರಣಕ್ಕೆ ಪರೀಕ್ಷೆ ಮಾಡಲಾಗಿರುತ್ತದೆಯೇ ? ಜೊತೆಗೆ ಕೆಲವು ಲಕ್ಷಣಗಳಿದ್ದರೆ ಆ ಲಕ್ಷಣಗಳಿಗೆ ಹೊಂದದಂತಹ ಲಸಿಕೆ ಕೊಡಬಾರದು ಎಂಬುದು ಅಮೇರಿಕಾ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ನ ನಿಯಮ. ಸಾಮೂಹಿಕ ಲಸಿಕೆ ಕೊಡುವಾಗ ಈ ನಿಯಮ ಸಹಜವಾಗಿಯೇ ಗಾಳಿಯಲ್ಲಿ ತೂರಿಹೋಗುತ್ತದೆ. ಈ ಕಾರಣದಿಂದಾದರೂ ಕನಿಷ್ಟ ಪಕ್ಷ ಸಾಮೂಹಿಕ ಲಸಿಕೆಯಿಂದಾದರೂ ದೂರವಿರುವುದು ಉತ್ತಮ ಎನ್ನಿಸುತ್ತದೆ.
ವ್ಯಾಕ್ಸಿನ್‍ಗಳ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಔಷಧಗಳನ್ನು ಹಂಚುವುದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿರುವುದು ಹಾಗೂ ಇದಕ್ಕೆ ವೈದ್ಯರುಗಳ (ಎಲ್ಲಾ ವೈದ್ಯರುಗಳದಲ್ಲ), ಸರ್ಕಾರದ ಪ್ರತಿನಿಧಿಗಳ ಸಹಕಾರವಿರುವುದನ್ನು ನಾವು ಶಂಕಿಸಬಹುದು. ಮೊನ್ನೆ ಗೆಳೆಯ ಷಡಕ್ಷರಮೂರ್ತಿಯವರು ಜೆನೆರಿಕ್ ಔಷಧಿಗಳು ಮತ್ತು ಆರ್.ಎಂ.ಜಿ ವೈದ್ಯರುಗಳು ಕೊಡುವ ಔಷಧಿಗಳ ಬಗ್ಗೆ ವಿವರಿಸುತಿದ್ದರು. ಇದರ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೆನೆ. ಅನೇಕ ದೇಶಗಳಲ್ಲಿ ನಿರ್ಬಂಧಿಸಲಾದ ಔಷಧಿಗಳು ಅಥವಾ ಔಷಧಿ ತಯಾರಿಕೆಯ ರಾಸಾಯನಿಕಗಳು ನಮ್ಮ ದೇಶದಲ್ಲಿ (ಉದಾ: ಇರ್ಲೋಪೆನ್, ಮೈಗ್ರಿಲ್, ಸಿಪ್ಟೊಮೆಟ ಇತ್ಯಾದಿ) ಬಿಕರಿಯಾಗುತ್ತಿವೆ. ಇದರಲ್ಲಿ ಕೆಲವನ್ನು ವೈದ್ಯರುಗಳ ಸಲಹೆ ಇಲ್ಲದೆ ತೆಗೆದುಕೊಳ್ಳಬಹುದು( ಉದಾ: ಮಾಲಾ-ಡಿ. ಇದು ಬೇರೆ ದೇಶದಲ್ಲಿ ಬೇರೆ ಹೆಸರಿನಿಂದ ಮಾರಾಟವಾಗುತ್ತಿತ್ತು!). ದುರಂತವೆಂದರೆ ಬಾಂಗ್ಲಾದೇಶ, ನೇಪಾಳದಂತಹ ರಾಷ್ಟ್ರಗಳೂ ದಿಟ್ಟತನದಿಂದ ನಿರ್ಬಂಧಿಸಿದ ರೆಸ್ಟಿಲ್, ಕಾಮ್‍ಸ್ಲಿಪ್ ನಂತಹ ಗುಳಿಗೆಗಳು ಭಾರತದಲ್ಲಿ ಬಳಕೆಯಲ್ಲಿವೆ! ಏಡ್ಸ್ ಔಷಧಿ, ಗರ್ಭನಿರೋಧಕ, ಕಾಂಡೊಮ್ ಬಿಕರಿಯಲ್ಲೂ ಕೆಲವು ಕುತಂತ್ರಗಳನ್ನು ತಳ್ಳಿ ಹಾಕುವಂತಿಲ್ಲ. ಪ್ರಾಸೆಸ್ ಪೇಟೆಂಟ್ ಬಿಟ್ಟು ಪ್ರಾಡಕ್ಟ್ ಪೇಟೆಂಟ್ ಅನ್ನು ಅಪ್ಪಿಕೊಂಡದ್ದು ಭಾರತ ಮಾಡಿದ ಅತ್ಯಂತ ಘೋರ ತಪ್ಪುಗಳಲ್ಲೊಂದು. ಇದು ನೇರವಾಗಿ ಔಷಧಿಗಳ ಏಕಸಾಮ್ಯವನ್ನು ದೊಡ್ಡ ದೊಡ್ಡ ಕಂಪನಿಗಳ ಕೈಯಲ್ಲಿ ಇಡುತ್ತದೆ. ಇದಲ್ಲದೇ ಬೇರೆ ಬೇರೆ ದೇಶದಲ್ಲಿ ಔಷಧಿಗಳು ಬೇರೆಬೇರೆ ಹೆಸರಿನಲ್ಲಿರುವುದರಿಂದ ಜನರಿರಲಿ ಡಾಕ್ಟರ್ ಗಳೇ ದಾರಿತಪ್ಪುವ ಹಾಗಾಗುತ್ತದೆ. ಆದ್ದರಿಂದ ಕಂಟೆಂಟ್‍ಗಳ ಅಧ್ಯಯನ ಮಾಡಬೇಕಾಗುತ್ತದೆ.
ನನ್ನ ಸ್ನೇಹಿತ ಸಂಪತ್ ಗೆ ಅಪಘಾತವಾಗಿ ಕಾಲು ಕೈಗಳಲ್ಲಿ ಆಳವಾದ ಗಾಯಗಳಾಗಿದ್ದವು. ವೈದ್ಯರು ಆಂಟಿ ಟೆಟಾನಸ್ ಸೂಜಿ ಚುಚ್ಚಿಸಿಕೊಳ್ಳಲು ಸಲಹೆ ಮಾಡಿದರು. ನಾನು ಲಸಿಕೆ ತರಲು ಮುಂದಾದಾಗ ನನ್ನನ್ನು ತಡೆದು ಸಂಪತ್ ಹೇಳಿದರು "ಲೋ ನಿಂಗೆ ತಲೆ ಕೆಟ್ಟಿದೆಯೇನೋ? ಏನೂ ಆಗಲ್ಲ ಹೆದರ್ಕೊಬೇಡ. ಗಾಳೀಲಿ ಬೇರೆ ಬೇರೆ ರೋಗ ತರೋ ನೂರಾರು ರೋಗಾಣುಗಳು ತೇಲಾಡ್ತಿರ್ತವೆ. ಯಾವುದ್ಯಾವುದಕ್ಕೆ ಅಂತ ಸೂಜಿ ಚುಚ್ಚಿಸ್ಕೊತಿಯ? ಮೈ ಎಲ್ಲಾ ತೂತಾಗಿ ಹೋಗುತ್ತೆ ಅಷ್ಟೇ!!". ಸ್ವಲ್ಪವೇ ಸಮಯದಲ್ಲಿ ಸಂಪತ್ ಚೇತರಿಸಿಕೊಂಡರು. ಈಗ ಸುಖವಾಗಿ ಬದುಕುತ್ತಿದ್ದಾರೆ. ಅಂದ ಹಾಗೆ ಸಂಪತ್ ಸ್ನಾತಕೋತ್ತರ ಬಯೋಮೆಡಿಕಲ್ ಇನ್ಸ್ಟ್ರುಮೆಂಟೇಶನ್‍ನಲ್ಲಿ ಬಂಗಾರದ ಪದವಿ ಪಡೆದಿರುವವರು!

ಕಾಮೆಂಟ್‌ಗಳಿಲ್ಲ: